ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ “ಸ್ಟ್ರಾಂಗ್ ವುಮನ್” 2023 ಪ್ರಶಸ್ತಿ ಪ್ರದಾನ

ಸ್ಟಾರ್ ಕನ್ನಡ ಫೌಂಡೇಶನ್ ವತಿಯಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ “ಸ್ಟ್ರಾಂಗ್ ವುಮನ್” ಪ್ರಶಸ್ತಿ ಪ್ರದಾನ ಮಾಡಲಾಯಿತು. ದುಬೈ ದಿಗ್ಗಜ ಡಾ. ಬು ಅಬ್ದುಲ್ಲಾ, ಡಾ.ರಾಜ್ ಕುಮಾರ್ ರವರ ಮಗಳು ಲಕ್ಷ್ಮೀ ಗೋವಿಂದರಾಜು ಕುಟುಂಬ ಹಾಗೂ KSBC ಸದಸ್ಯರಾದ ಎಲ್ ಶ್ರೀನಿವಾಸಬಾಬು ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023ರ ಸಾಲಿನ ವಿಜೇತರಾಗಿ ಪ್ರೊ. ಶಿಲ್ಪಿ ಚೌಧರಿ, ಡಾ.ಜಯಲಕ್ಷ್ಮಿ ಜಿತೇಂದ್ರ, ಮೀನಾಕ್ಷಿ ಕಾರಂತ್, ಖುದುಸಿಯ ನಜೀರ್, ಅನಿಶ್ ಫಾತಿಮಾ, ಹರ್ಷಿನಿ ವೆಂಕಟೇಶ್, ಹಂಸ ವಿ, ಸವಿತಾ

Read More

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದಲ್ಲಿ

ರಿಯಲ್ ಹೀರೋ ಸೋನು ಸೂದ್ ಮೊದಲ ಬಾರಿಗೆ ಕನ್ನಡದ ಶ್ರೀಮಂತ ಚಿತ್ರದ ಮೂಲಕ ಮುಖ್ಯ ಭೂಮಿಕೆಯಲ್ಲಿ ರೈತನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸೂಪರ್ ಸ್ಟಾರ್ಸ ಪತ್ರಿಕೆಯು ನಡೆಸಿದ ಶ್ರೀಮಂತ ಚಿತ್ರದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸೂನು ಸೂದ್ ಶ್ರೀಮಂತ ಚಿತ್ರಕಥೆ ವಿಭಿನ್ನವಾಗಿದೆ. ಇದುವರೆಗೂ ನಾನು ಅಭಿನಯಿಸಿದ ಚಿತ್ರಗಳಿಗೆ ಹೋಲಿಸಿದರೆ ಶ್ರೀಮಂತ ಚಿತ್ರದ ನನ್ನ ಪಾತ್ರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ ಎಂದರು . ಇದೇ ಮೇ 19. ರಂದು ಶ್ರೀಮಂತ ನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.

Read More

ಶ್ರೀಮಂತ ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು

ಹೃದಯ ಸ್ಪರ್ಶಿಸುವ ಕಥಾಹಂದರವುಳ್ಳ ಚಿತ್ರ ಶ್ರೀಮಂತ. ಈ ಚಿತ್ರದ ಕಥೆ ಕೇಳಿದ ಕೂಡಲೇ ಚಿತ್ರನಿರ್ಮಾಣದ ನಿರ್ಧಾರಕ್ಕೆ ಮುಂದಾದೆವು ಎಂದು ಚಿತ್ರದ ನಿರ್ಮಾಪಕರಾದ ಜಿ ನಾರಾಯಣಪ್ಪ ಮತ್ತು ಯುವ ನಿರ್ಮಾಪಕ ಸಂಜಯಬಾಬು ನಮ್ಮ ಸೂಪರ್ ಸ್ಟಾರ್ಸ ಪ್ರತಿಕೆಯ ಶ್ರೀಮಂತ ಚಿತ್ರದ ಕುರಿತಾದ ವಿಶೇಷ ಸಂಚಿಕೆಯ ಸಂದರ್ಶನದಲ್ಲಿ ಹೇಳಿದರು. ಇದೇ ತಿಂಗಳ ಮೇ ೧೯ ರಂದು ಶ್ರೀಮಂತ ಬಿಡುಗಡೆಯಾಗಲಿದೆ.

Read More

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ನಿರ್ದೇಶಕರಾದ ಹಾಸನ್ ರಮೇಶ್

ಕನ್ನಡದ ಬಹು ನಿರೀಕ್ಚಿತ ಚಿತ್ರ ಶ್ರೀಮಂತ ಇದೇ ಮೇ ೧೯ ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಸೂಪರ್ ಸ್ಟಾರ್ಸ್ ಪ್ರತಿಕೆಯ ಶ್ರೀಮಂತ ಶೀರ್ಷಿಕೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಮಂತ ಚಿತ್ರದ ನಿರ್ದೇಶಕರಾದ ಹಾಸನ್ ರಮೇಶ್ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಎರಡನೇಯ ಬಂಗಾರದ ಮನುಷ್ಯ ಚಿತ್ರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Read More

ತನುಶ್ರೀ ದತ್ತಾ ಹೇಗಿದ್ದಾಳೆ..

ಅದು ೨೦೦೪ ಕಾಲ. ಯುವ ಮನಸ್ಸುಗಳ ಹಾರ್ಟ ಬಿಟ್ ಆಗಿದ್ದ ತನುಶ್ರೀ ದತ್ತಾ ಅದೆಷ್ಟೊ ಗಂಡ್ ಹೈಕ್ಳಗಳ ನಿದ್ದೆಗೆಡಿಸಿದ ಕನಸಿನ ರಾಣಿ. ೨೯ ಮಾರ್ಚ ೧೮೮೪ ರಲ್ಲಿ ಜಾರ್ಖಡ್‌ನಲ್ಲಿ ಜನಿಸಿದ ತನು. ಯೂನಿವರ್ಸ ಸೌಂದರ್ಯಕ್ಕೆ ಈಕೆ ಫೇಮಿನಾ ಮಿಸ್ ಯೂನಿವರ್ಸ ಪ್ರಶಸ್ತಿಯನ್ನ ಮುಡಿಗೇರಿಸಿಕೊಳ್ತಾರೆ. ಅದಾದ ನಂತರ ಇವಳ ಪ್ರತಿಭೆ ಸೌಂದರ್ಯಕ್ಕೆ ಬಾಲಿವುಡ್ ರಂಗ ತನುಗೆ ಕೈಬೀಸಿ ಕರೆಯುತ್ತೆ ಇದರಿಂದ ಸುಮಾರು ಐದು ವರ್ಷಗಳ ಕಾಲ ತನು ಹಿಂದಿ ಚಿತ್ರರಂಗಲ್ಲಿ ಮಿಂಚುತ್ತಾಳೆ ಅವಳಿಗೆ ಆಗಾಧತೆಯ ಹೆಸರು ತಂದ ಚಿತ್ರಗಳು

Read More

”ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ” ಪ್ರಶಸ್ತಿ ಸಮಾರಂಭ

೪ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. ೨೦೨೨ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್- ೨’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತಾರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್

Read More

ವಿಶ್ವ ಕನ್ನಡ ಸಿನಿಮಾ ಹಬ್ಬದ ಸಂಭ್ರಮಾಚರಣೆ

ಸತಿ ಸುಲೋಚನ ಚಿತ್ರ ತೆರೆಗೊಂಡು ೯೦ ವರ್ಷಗಳಾಗುವ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಾಜೇಂದ್ರಸಿ0ಗ್ ಬಾಬು , ಪ್ರಸ್ತುತ ೪೦೦ ಸಿನಿಮಾ ಟಾಕೀಸ್‌ಗಳು ಇವೆ. ಇನ್ನೂ ೨ವರ್ಷದಲ್ಲಿ ಅವುಗಳು ಮುಚ್ಚು ಹೋಗಲಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಪರಭಾಷೆ ಚಿತ್ರಗಳದೇ ಅಬ್ಬರ ಎಂದು ವಿಷಾದ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಚಿತ್ರ ನಗರಿ ಸ್ಥಾಪನೆಗೆ ನಕಾರಾತ್ಮಕ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳು ವ್ಯಕ್ತಪಡಿಸುತ್ತಿದ್ದಾರೆ. ತಾವು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ತೀವ್ರ ತೊಂದರೆಯಲ್ಲಿರುವ ಕಲಾವಿದರಿಗೆ ತಲಾ ೭೫ ಸಾವಿರ

Read More

ಸುನಿಲ್‌ರಾವ್ ಈಗ ವೀರ್ ಸಾವರ್ಕರ್

ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ವೀರ್ ಸಾವರ್ಕರ್ ಪಾತ್ರದಲ್ಲಿ ಖ್ಯಾತ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಎಕ್ಸ್ಕ್ಯೂಸಮಿ ಖ್ಯಾತಿಯ ನಟ ಸುನಿಲ್‌ರಾವ್ ಅಭಿನಯಿಸಲಿದ್ದಾರೆ. ವೀರ ಸಾವರ್ಕರ್ ಚಿತ್ರದ ಕುರಿತಂತೆ ಮಾತನಾಡಿದ ಸುನಿಲ್‌ರಾವ್ ಒಬ್ಬ ನಟನಿಗೆ ಮಹತ್ತರ ಪಾತ್ರ ನಿರ್ವಹಿಸಬೇಕೆಂಬ ಗಮ್ಯ ಇದ್ದೇ ಇರುತ್ತೆ. ಆದರೆ, ಅಂತಹ ಅವಕಾಶ ಸಿಗುವುದು ಬಹಳ

Read More

‘ರೆಡ್‌ರಮ್’ಚಾಲೆಂಜಿ0ಗ್ ಪಾತ್ರದಲ್ಲಿ ಮಧುರ ಗೌಡ

ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ಕಾಲಘಟ್ಟದಲ್ಲಿ ಮತ್ತೊಂದು ರೋಚಕ ಕಥಾ ಹಂದರದ `ರೆಡ್‌ರಮ್’ ಚಿತ್ರ ಸೇರ್ಪಡೆಯಾಗುತ್ತಿದೆ.ಕೌಟಿಲ್ಯ ಸಿನಿಮಾ ಹಾಗೂ ಎಚ್‌ಸಿ ಫಿಲ್ಮ್÷್ಸ ಲಾಂಛನದಲ್ಲಿ ಅಶೋಕ್ ದೇವನಾಂಪ್ರಿಯ, ಮೋಹನ್ ಮತ್ತು ಹನಿ ಚೌಧರಿ ನಿರ್ಮಾಣದ ಈ ಚಿತ್ರವೂ ಇತ್ತೀಚೆಗಷ್ಟೇ ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕೂರ್ಗಿ ಚೆಲುವೆ, ಅಭಿನಯ ಚತುರೆ ಮಧುರ ಗೌಡ ಈ ಚಿತ್ರದ ನಾಯಕಿ. ದುಂಡು ಮುಖದ ಮುದ್ದು ಮುದ್ದಾದ ಬೆಡಗಿ. ಮಧುರ ಮಾಡಲಿಂಗ್

Read More